Tuesday, September 18, 2012

Ganesha-parisara-nasha



ಕನಸಲಿ ಗಣೇಶ ಬಂದ
ಸೊಂಡಿಲನಾಡಿಸುತ ಅಂದ
ಗೊತ್ತೇನೋ ಮೂಢ ನಾನ್ಯರೆಂದ
ಭಯದಲಿ ನಾನು ನಡುಗುತ

ಹೌದೋ ಯಪ್ಪ ನಿನ್ನ ಹೊಟ್ಟೆ ದಪ್ಪ
ನೀನೆ ತಾನೆ ಕಡಬು ಪ್ರಿಯ ಗಣಪ
ಜಗದ ವಿಷ  ನುಂಗಿದ ಈಶ-
ನ ಮಗನಲ್ಲವೆ ಓ ಗಣೇಶ

ಸಾಕು ನಿಲ್ಲಿಸು ನಿನ್ನ ನಾಟಕದ ಸ್ತುತಿ
ಎನಾಗಿಹುದು ನಿಮ್ಮೆಲ್ಲರ ಮತಿ
ಕರಗದ ವಸ್ತುಗಳಲೆನ್ನನು ಮಾಡಿ
ಪೈಪೋಟಿಗೆ ರಾಸಾಯನಿಕ ಬಣ್ಣವ ಬಳಿದಾಡಿ

"ಗಣೇಶ ಗಣೇಶ" ಎಂದು ಹುಸಿ ಕೂಗಾಡಿ
ದುಂದಿನ ಮೆರವಣಿಗೆ ಮಾಡಿ ಕೆರೆಯಲಿ ದೂಡಿ
ನೀರಾಗಿದೆ ವಿಷ ಪರಿಸರವೆಲ್ಲ ನಾಶ
ಸರಳದಿ ಮನದಲಿ ನೆನೆಯಿರಿ ಕಡಬನು ತಿನ್ನುತ ನಲಿಯಿರಿ
ನನ್ನ ಪ್ರೀತಿಗೆ ಪಾತ್ರವಾಗಿ ಕೂಡಿ ಬಾಳಿರಿ
     ಎನ್ನುತ ಕರಗಿ ಮಾಯವಾದ ಗಣೇಶ

*************************************************
ಗಣೇಶ ದುಃಖದಿ ಎಂದ ನನಗೇಕೀ ಶಿಕ್ಷೆ
ಅಪ್ಪನನು ಭುವಿಗಿಳಿಸಿ ನುಂಗಿಸಿದಿರಿ ವಿಷ
ನನ್ನಯ ಹೆಸರಲಿ ಮಾಡುತಿರುವಿರೇಕೆ ಪರಿಸರ ನಾಶ


No comments:

Post a Comment